27ರಂದು ಬೆಳಿಗ್ಗೆ 4ಕ್ಕೆ ಬಸಯ್ಯ ಶಾಸ್ತ್ರಿಗಳು ಕರಿಬಸವೇಶ್ವರ ಸ್ವಾಮಿ ಗದ್ದುಗೆಗೆ ಮಹಾರುದ್ರಾಭಿಷೇಕ ನೆರವೇರಿಸುವರು. 6ಕ್ಕೆ ಗಂಗೆ ಪೂಜೆ ಮಾಡುವರು. ಬಳಿಕ ವೀರಗಾಸೆ, ನಂದಿಕೋಲು, ಸಮಾಳ ಮೇಳದೊಂದಿಗೆ ಗ್ರಾಮದಲ್ಲಿ ಸಂಚರಿಸುತ್ತಾರೆ. ನಂತರ ಅಗ್ನಿ ಪ್ರವೇಶ, ಮಹಾಮಂಗಳಾರತಿ, ದಾಸೋಹ ವ್ಯವಸ್ಥೆ ನಡೆಯಲಿದೆ ಎಂದು ದೇಗುಲ ಪ್ರಕಟಣೆ ತಿಳಿಸಿದೆ.