‘ಮಾಧುರ್ಯಕ್ಕೆ ಮತ್ತೊಂದು ಹೆಸರು ಪಿಬಿಎಸ್. ಅವರು ಸಪ್ತ ಭಾಷೆಗಳ ಗಾಯಕರು ಮಾತ್ರವಲ್ಲ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಇಂಗ್ಲಿಷ್ನಲ್ಲೂ ಕವನಗಳನ್ನು, ಉರ್ದುವಿನಲ್ಲಿ ಗಜಲ್ ಬರೆದು ಹಾಡಿದ ಮೇಧಾವಿ. ಸಂಗೀತ ಭಾಷಾತೀತ, ಜಾತ್ಯತೀತ, ಧರ್ಮಾತೀತ, ದೇಶಾತೀತ. ಇದಕ್ಕೆ ಮರುಳಾಗದವರೇ ಇಲ್ಲ, ಸಂಗೀತ ಒಂದು ಸಿದ್ಧ ಔಷಧ. ಯುದ್ಧದಾಹಿಗಳಿಗೆ ಪಿಬಿಎಸ್ ಅವರ ಕವನ ಕೇಳಿಸಿದರೇ ಅವರು ಯುದ್ಧವನ್ನೇ ಮರೆಯುತ್ತಾರೆ. ಖಿನ್ನತೆಯಿಂದ ಅತ್ಮಹತ್ಯೆಯ ಆಲೋಚನೆಯಲ್ಲಿ ಇರುವ ವ್ಯಕ್ತಿ ಪಿಬಿಎಸ್ ಹಾಡುಗಳನ್ನು ಆಲಿಸಿದರೆ ಆತ ಜೀವನ ಪ್ರೇಮಿಯಾಗುತ್ತಾನೆ’ ಎಂದು ಬಣ್ಣಿಸಿದರು.