ಪಾಂಡವಪುರ: ‘ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರು ಅಮೆರಿಕ ಪ್ರಜೆ, ಅವರ ನಾಮಪತ್ರ ಅನರ್ಹಗೊಳ್ಳಲಿದೆ ಎಂದು ಸುಳ್ಳು ವದಂತಿ ಹಬ್ಬಿಸಿ ಸಾರ್ವಜನಿಕರಲ್ಲಿ ಗೊಂದಲು ಉಂಟು ಮಾಡುತ್ತಿದ್ದಾರೆ. ಆದರೆ, ದರ್ಶನ್ ಅವರು ಭಾರತೀಯ ಪ್ರಜೆಯಾಗಿಯೇ ಉಳಿದಿರುವುದರಿಂದ ಅವರ ನಾಮಪತ್ರ ಅರ್ಹಗೊಳ್ಳಲಿದೆ’ ಎಂದು ಪಕ್ಷದ ಕಾನೂನು ಸಲಹೆಗಾರ, ವಕೀಲ ಕೇಶವಮೂರ್ತಿ ತಿಳಿಸಿದರು.