ಕುಮಾರಪಟ್ಟಣ: ಹರಿಹರ ತಾಲ್ಲೂಕಿನ ಶ್ರೀಕ್ಷೇತ್ರ ಉಕ್ಕಡಗಾತ್ರಿ ಶ್ರೀ ಅಜ್ಜಯ್ಯನ ಸನ್ನಿಧಿಗೆ ಹನುಮನಹಳ್ಳಿ ಗ್ರಾಮದ ಮೂಲಕ ಪ್ರತಿ ಅಮಾವಾಸ್ಯೆಯಂದು ಬೆಂಗಳೂರು, ಚಿತ್ರದುರ್ಗ, ದಾವಣ ಗೆರೆಯಿಂದ ಅನೇಕ ಭಕ್ತರು ಸಾರಿಗೆ ಹಾಗೂ ಖಾಸಗಿ ವಾಹನಗಳಲ್ಲಿ ಬಂದು ಹೋಗುತ್ತಾರೆ. ಇದಲ್ಲದೆ ರಾಣೆ ಬೆನ್ನೂರು ನಗರಕ್ಕೆ ಮುದೇನೂರು, ಮಾಕನೂರು ಕುಮಾರಪಟ್ಟಣದ ಮೂಲಕ ಹರಿಹರ ನಗರ ತಲುಪಲು ಈ ಗ್ರಾಮ ಸಂಪರ್ಕ ಸೇತುವೆಯಾಗಿದೆ.