'ಗುರುವು ಗುರುವೇ ಮತ್ತು ಜಂಗಮ ಜಂಗಮನೇ' ಎನ್ನುವ ಮೂಲಕ 'ವಿರಕ್ತ'ರು 'ಗುರು'ಗಳಿಗೆ ಸಮರಲ್ಲ ಎಂಬುದನ್ನು ಪರೋಕ್ಷವಾಗಿ ಪ್ರತಿಪಾದಿಸಿದ್ದಾರೆ! 'ಬಸವಣ್ಣನವರನ್ನು ನಾವೂ ಗೌರವಿಸುತ್ತೇವೆ' ಎಂಬ ಇವರ ಮಾತನ್ನು ಬಸವಣ್ಣನವರಿಗೆ ಪಂಚಾಚಾರ್ಯರಿಂದ ಆದ ಅಪಮಾನ ನೋಡುತ್ತಾ ಬಂದ ಯಾರೂ ಒಪ್ಪುವುದಿಲ್ಲ. ಇನ್ನು 'ಈ ಧರ್ಮ ಐದು ಸಾವಿರ ವರ್ಷಗಳಷ್ಟು ಹಳೆಯದು' ಎಂಬುದನ್ನು ಸಂಶೋಧಕ ದಿಗ್ಗಜರಾದ ಡಾ.ಎಂ.ಎಂ.ಕಲಬುರ್ಗಿ ಅವರಾಗಲೀ, ಡಾ.ಎಂ.ಚಿದಾನಂದ ಮೂರ್ತಿ ಅವರಾಗಲೀ ಒಪ್ಪಿಲ್ಲ. ‘ಎಂ.ಬಿ.ಪಾಟೀಲ ಮತ್ತು ವಿನಯ ಕುಲಕರ್ಣಿಯವರ ಪರಿಸ್ಥಿತಿ ಗಂಭೀರವಾಗಿದೆ. ಅವರ ಸೋಲಿಗೆ ಅವರೇ ಕಾರಣ' ಎಂಬ ಭವಿಷ್ಯ ಹುಸಿಯಾದರೆ ಆಗ ಸ್ವಾಮಿಗಳು ಏನು ಮಾಡುತ್ತಾರೆ?