ಮಳವಳ್ಳಿ: ತಾಲ್ಲೂಕಿನ ಮುತ್ತತ್ತಿ ಅರಣ್ಯ ಪ್ರದೇಶದ ಸೊಲಬ ಗ್ರಾಮದ ಬಳಿ ಬುಧವಾರ ರಾತ್ರಿ ಕಾಡಾನೆ ದಾಳಿಯಿಂದ ಅರಣ್ಯ ವೀಕ್ಷಕರೊಬ್ಬರು ಮೃತಪಟ್ಟಿದ್ದಾರೆ.
ಮರಿಗೌಡನದೊಡ್ಡಿ ಗ್ರಾಮದ ಮಾದಯ್ಯ ಅವರ ಪುತ್ರ ಮಹದೇವ (33) ಮೃತಪಟ್ಟವರು. ಗಸ್ತಿನಲ್ಲಿದ್ದಾಗ ಆನೆ ದಾಳಿ ಮಾಡಿದೆ. ಅರಣ್ಯಾಧಿಕಾರಿಗಳಾದ ಡಾ.ಮಂಜುನಾಥ, ಅಂಕರಾಜು, ಕಿರಣ್ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.