ಹಿರಿಯ ಮೊಗವೀರ ಮುಖಂಡರಾದ ಮಂಜು ನಾಯ್ಕ ತ್ರಾಸಿ, ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ ರಾಜು ಶ್ರೀಯಾನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್, ಶೀನ ದೇವಾಡಿಗ, ಸಂಸ್ಥೆಯ ಅಧ್ಯಕ್ಷ ರಾಜು ಮೆಂಡನ್ ತ್ರಾಸಿ, ವಾಸು ಪುತ್ರನ್ ಇದ್ದರು. ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ಮಾಜಿ ಅಧ್ಯಕ್ಷ ವಾಸು ಜಿ. ವಂಡ್ಸೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಂತರ ಪೆರ್ಡೂರು ಮೇಳದವರಿಂದ ’ಆಹಂ ಬ್ರಹ್ಮಾಸ್ಮಿ’ ಯಕ್ಷಗಾನ ಪ್ರದರ್ಶನ ನಡೆಯಿತು.