‘ಈ ಚಿತ್ರದಲ್ಲಿ ನಾಯಕ, ನಾಯಕಿ, ಪೋಷಕ ಪಾತ್ರಗಳು ಎಂದೆಲ್ಲ ವರ್ಗೀಕರಣ ಇಲ್ಲ. ಎಲ್ಲ ಪಾತ್ರಗಳಿಗೂ ಸಮಾನ ಅವಕಾಶ ಇದೆ’ ಎಂದರು ನಾಯಕ ಅವಿನಾಶ್ ಎಸ್. ‘ಕನ್ನಡಕ್ಕಾಗಿ ಯಾಕೆ ಒಂದನ್ನು ಒತ್ತಬೇಕು ಎನ್ನುವುದನ್ನು ತಿಳಿಯಲು ಸಿನಿಮಾ ನೋಡಿ’ ಎಂದು ತಮ್ಮದೇ ಶೈಲಿಯಲ್ಲಿ ಚಮಕ್ ಕೊಟ್ಟರು ಚಿಕ್ಕಣ್ಣ. ‘ಪ್ರೇಕ್ಷಕರಷ್ಟೇ ಕುತೂಹಲದಿಂದ ನಾನೂ ಈ ಚಿತ್ರಕ್ಕಾಗಿ ಕಾತರದಿಂದ ಕಾದಿದ್ದೇನೆ. ಭಟ್ಟರ ಕಂಪನಿಯಿಂದ ಆಡಿಯೊ ಬಿಡುಗಡೆಯಾಗುತ್ತಿರುವುದು ಖುಷಿ ಕೊಟ್ಟಿದೆ’ ಎಂದರು ನಾಯಕಿ ಕೃಷಿ ತಾಪಂಡ.