ಬೆಳಗಾವಿ: ಇಲ್ಲಿನ ಗಣೇಶಪುರದ ನಿವಾಸಿ ಸಾಗರ ಲಾಖೆ (30) ಎಂಬುವವರನ್ನು ಪ್ರಗತಿಪರ ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಬುಧವಾರ ತಡರಾತ್ರಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಹತ್ಯೆ ಪ್ರಕರಣದ ಆರೋಪಿಗಳಿಗೆ ತನ್ನ ರೆಸಾರ್ಟ್ನಲ್ಲಿ ಆಶ್ರಯ ನೀಡಿದ ಆರೋಪದ ಮೇಲೆ ಈಗಾಗಲೇ ಬಂಧಿತನಾಗಿರುವ ಭರತ ಕುರ್ನೆ ಅವರ ಬಳಿ ಸಾಗರ ಕೆಲಸಕ್ಕಿದ್ದ. ರೆಸಾರ್ಟ್ನ ಉದ್ಯಾನದ ಉಸ್ತುವಾರಿ ವಹಿಸಿಕೊಂಡಿದ್ದ ಎನ್ನಲಾಗುತ್ತಿದೆ.
ಭರತ ಕುರ್ನೆ ಅವರ ಜೊತೆ ನಿರಂತರವಾಗಿ ನಡೆಸಿದ ಫೋನ್ ಸಂಭಾಷಣೆಗಳ ಆಧಾರದ ಮೇಲೆ ಸಾಗರನನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ.