ಬೀಳುವ ಮುನ್ನ ಗುಂಡಿ ಮುಚ್ಚಿ: ‘ರಸ್ತೆ ನಡುವೆ ಗುಂಡಿ ಬಿದ್ದು ತಿಂಗಳಾದರೂ ಮಹಾನಗರ ಪಾಲಿಕೆ ಸಿಬ್ಬಂದಿ ದುರಸ್ತಿಗೆ ಕ್ರಮಕೈಗೊಂಡಿಲ್ಲ. ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ರಾತ್ರಿ ವೇಳೆ ವೇಗವಾಗಿ ಬರುವ ಬೈಕ್, ಆಟೊ ರಿಕ್ಷಾ, ಕಾರುಗಳು ಬೀಳುವ ಸಾಧ್ಯತೆ ಇದೆ. ಆದಷ್ಟು ಬೇಗ ದುರಸ್ತಿ ಮಾಡಬೇಕು’ ಎಂದು ಬೈಕ್ ಸವಾರ ಆರ್.ವಿ.ಉಪಾಧ್ಯಾ, ಆಟೊ ಚಾಲಕ ರಜಾಕ್ ಮಡಕೇರಿ, ಹೆಲ್ಮೆಟ್ ವ್ಯಾಪಾರಿ ಸಯ್ಯದ್ ಬಳ್ಳಾರಿ ಒತ್ತಾಯಿಸಿದರು.