ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕ್ಷೇತ್ರಕ್ಕೆ ಒಬ್ಬರು ವೀಕ್ಷಕರು (ಸಾಮಾನ್ಯ) ಹಾಗೂ ಇಬ್ಬರು ವೀಕ್ಷಕರನ್ನು (ವೆಚ್ಚ) ಆಯೋಗ ನೇಮಕ ಮಾಡಿದೆ. ಮತಗಟ್ಟೆ ಅಧಿಕಾರಿಗಳಿಗೆ ಇದೇ 23ರಂದು ಹಲಗೆವಡೇರಹಳ್ಳಿ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ತರಬೇತಿ ನೀಡಲಾಗುತ್ತದೆ. ಮೇ 31ರಂದು ಮತ ಎಣಿಕೆ ನಡೆಯಲಿದೆ’ ಎಂದರು.