ಜಿಲ್ಲೆಯ ವ್ಯಾಪ್ತಿಯಲ್ಲಿ ರಾಮನಗರ, ಬಿಡದಿ ಪಟ್ಟಣಗಳ ಒಳಗೆ ಹೆದ್ದಾರಿಯನ್ನು ವಿಸ್ತರಣೆ ಮಾಡಲಾಗಿದೆ. ರಸ್ತೆ ದೊಡ್ಡದಾಗಿದೆ. ರಸ್ತೆ ವಿಭಜಕವನ್ನೂ ದಾಟಿ ಎದುರಿನ ಹಾದಿಗೆ ವಾಹನಗಳು ನುಗ್ಗಿ ಅಪಘಾತವಾಗಿ ಸಾವು–ನೋವು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಭಜಕ ಮಾರ್ಗವನ್ನು ಬಂದೋಬಸ್ತ್ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ
ಹಾಗೆ ಮಾಡಲು ಹೋಗಿ ಪರಿಸರವನ್ನೇ ನಾಶ ಮಾಡುತ್ತಿರುವುದು ಮಾತ್ರ ಸರಿಯಲ್ಲ ಎನ್ನುತ್ತಾರೆ ಬಿಡದಿ ಪಟ್ಟಣದ ನಿವಾಸಿ ರಮೇಶ್.