ತಾಲ್ಲೂಕಿನ ವೆಂಕಟಗಿರಿಯ ಸ್ವಾಮಿನಾಯ್ಕ ಅವರ 250, ವೆಂಕಾನಾಯ್ಕ ಅವರ 200, ರೆಡ್ಡಿ ನಾಯ್ಕ ಅವರ 150, ಬಾಬುನಾಯ್ಕ ಅವರ 250, ಸುಶೀಲಾನಗರ ಬಳಿಯ ರಾಧಾನಗರ ಭಾಗದ ತಾವರೆನಾಯ್ಕ ಅವರ 250 ಹಾಗೂ ಅಲ್ಲಾಭಕ್ಷಿಯವರ ತೋಟದಲ್ಲಿನ 400 ಬಾಳೆ ಗಿಡಗಳು ನೆಲಕ್ಕುರುಳಿವೆ. ಪಟ್ಟಣದ ಹಗರಿ ಬಸವರಾಜಪ್ಪ, ಗಡಂಬ್ಲಿ ಷಣ್ಮುಖಪ್ಪ, ಸಿದ್ದಪ್ಪ, ಚಂದ್ರೇಗೌಡರ ಎಲೆ ತೋಟಗಳಿಗೆ ಹಾನಿಯಾಗಿದೆ.