ನಗರದ ಮಾರುಕಟ್ಟೆ ಸ್ತೆಗೆ ಹೊಂದಿಕೊಂಡಿರುವ ಈ ಗಲ್ಲಿಯ ನಿವಾಸಿಗಳು ಶುದ್ಧ ಕುಡಿಯುವ ನೀರಿನ ಘಟಕ, ಸಾರ್ವಜನಿಕ ಶೌಚಗೃಹ ಸೇರಿದಂತೆ ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಶಹಪುರ ಪೇಟೆ, ಬಸವೇಶ್ವರ ನಗರ ಭಾಗದ ಸಾರ್ವಜನಿಕರು ಜವುಳಗಲ್ಲಿಯ ಮೂಲಕ ನಗರದ ಐತಿಹಾಸಿಕ ಪ್ರಸಿದ್ಧ ವೀರನಾರಾಯಣ ದೇವಸ್ಥಾನಕ್ಕೆ ಹೋಗುತ್ತಿದ್ದರು. ಆದರೆ, ಸ್ವಚ್ಛತೆ ಕೊರತೆ, ತ್ಯಾಜ್ಯದ ರಾಶಿ ಹಾಗೂ ಬೀದಿ ನಾಯಿಗಳ ಹಾವಳಿಯಿಂದ ಈ ರಸ್ತೆಯಲ್ಲಿ ಸಂಚರಿಸುವುದನ್ನೇ ನಿಲ್ಲಿಸಿದ್ದಾರೆ.