ಶಾಲೆಯ ಕಾರ್ಯದರ್ಶಿ ಶ್ರೀನಿವಾಸ್ ಮತ್ತು ಕಟ್ಟಡ ಮಾಲೀಕ ಸತ್ಯನಾರಾಯಣ ನಡುವೆ ಹಣಕಾಸು ವ್ಯವಹಾರ ಇದೆ. ಗುರುವಾರ ಶಾಲೆಯ ಆವರಣ ಪ್ರವೇಶಿಸಿದ ಸತ್ಯನಾರಾಯಣ ಮತ್ತು ಸಹಚರರು ಶಾಲೆಯ ನಾಮಫಲಕಕ್ಕೆ ಬಣ್ಣ ಬಳಿದು, ಖಾಸಗಿ ಸ್ವತ್ತು ಎಂದು ಬರೆದರು. ಮಕ್ಕಳು ಪ್ರವೇಶಿಸದಂತೆ ವ್ಯವಸ್ಥೆ ಮಾಡಿದರು. ಶಾಲೆಯ ಆವರಣದಲ್ಲಿ ಟ್ರಾಕ್ಟರ್ ಇರಿಸಿ, ಎಮ್ಮೆ ಕಟ್ಟಿದರು.