ನಗರವನ್ನು ಸಂಪರ್ಕಿಸುವ ಬಿ.ಬಿ.ರಸ್ತೆ, ಗೌರಿಬಿದನೂರು ರಸ್ತೆ, ಶಿಡ್ಲಘಟ್ಟ ರಸ್ತೆ, ಚಿತ್ರಾವತಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನಗರ ಹೊರವಲಯದಲ್ಲಿ ರಸ್ತೆ ಇಕ್ಕೆಲಗಳಲ್ಲಿ ಸಣ್ಣ ಸಣ್ಣ ಶೆಡ್ ನಿರ್ಮಿಸಿಕೊಂಡು ಹಂದಿ ಮಾಂಸ ಮಾರಾಟ ಮಾಡಲಾಗುತ್ತದೆ. ಕಳೆದ ನಾಲ್ಕೈದು ದಿನಗಳಿಂದ ಮಾಧ್ಯಮಗಳಲ್ಲಿ ನಿಫಾ ಸೋಂಕಿನ ಸುದ್ದಿ ಕೇಳಿರುವ ಜನರು ಹಂದಿ ಮಾಂಸ ತಿನ್ನಲು ಭಯ ಬೀಳುತ್ತಿದ್ದಾರೆ.