‘ದೇಶದಲ್ಲಿನ 5 ಲಕ್ಷಕ್ಕೂ ಹೆಚ್ಚು ಉದ್ದಿಮೆ ಸಂಸ್ಥೆಗಳಿಗೆ ಇದರಿಂದ ವಾರ್ಷಿಕ ಒಟ್ಟಾರೆ ₹ 900 ಕೋಟಿಗಳಷ್ಟು ಉಳಿತಾಯ ಆಗಲಿದೆ. ನೌಕರರನ್ನು ಸಾಮಾಜಿಕ ಸುರಕ್ಷತಾ ಯೋಜನೆ ವ್ಯಾಪ್ತಿಗೆ ತರಲು ಈ ನಿರ್ಧಾರವು ಮಾಲೀಕರಿಗೆ ಉತ್ತೇಜನ ನೀಡಲಿದೆ’ ಎಂದು ಕೇಂದ್ರೀಯ ಭವಿಷ್ಯ ನಿಧಿ ಕಮಿಷನರ್ ವಿ. ಪಿ. ಜಾಯ್ ಹೇಳಿದ್ದಾರೆ.