ಬೆಂಗಳೂರು ದೇವರಜೀವನಹಳ್ಳಿ ನಿವಾಸಿಗಳಾದ ಮಹಮದ್ ಐಸಾನ್ (20), ರಫೀಕ್ (21), ವಾಸಿಂಪಾಷಾ (19) ಮತ್ತು ಮಹಮದ್ ಜಾವೀದ್ (20) ಬಂಧಿತರು. ಆರೋಪಿಗಳಿಂದ ಚಾಕು, ಲಾಂಗು, ಮೆಣಸಿನ ಪುಡಿ, ದೊಣ್ಣೆ ಮತ್ತು ಆಟೊರಿಕ್ಷಾ ವಶಪಡಿಸಿಕೊಂಡಿದ್ದಾರೆ. ಕೋಲಾರ ಹೆದ್ದಾರಿಯ ಅಲಸಳ್ಳಿ ಗೇಟ್ ಬಳಿಯ ನಿರ್ಜನ ಪ್ರದೇಶದಲ್ಲಿ ಆರೋಪಿಗಳು ಸುಲಿಗೆ ಮಾಡಲು ನಿಂತಿದ್ದಾಗ ಪೊಲೀಸರ ಬಲೆಗೆ ಬಿದ್ದರು.