ರಾಯಚೂರಿನ ‘ಪದ್ಮನಾಭ’ ಚಿತ್ರಮಂದಿರದಲ್ಲಿ ಮುಂಚೆಯೇ ಟಿಕೆಟ್ ವಿತರಿಸಲಾಗಿತ್ತು. ಬೆಳಗಿನ ಪ್ರದರ್ಶನ ವೀಕ್ಷಿಸಲು ಚಿತ್ರ ಮಂದಿರದತ್ತ ಪ್ರೇಕ್ಷಕರು ಬರಲಾರಂಭಿಸಿದ್ದರು. ಆದರೆ, ವಿವಿಧೆಡೆ ಚಿತ್ರದ ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ಮಾಹಿತಿಯಿಂದ ಎಚ್ಚೆತ್ತುಕೊಂಡ ಚಿತ್ರಮಂದಿರ ಮಾಲೀಕರು ಪ್ರದರ್ಶನ ರದ್ದುಗೊಳಿಸಿದರು.