‘ಸಮುದಾಯ ಸಂಘಟನೆಯಲ್ಲಿ ಖ್ಯಾತರಾಗಿರುವ ಮಾಜಿ ಶಾಸಕ ಭೀಮಣ್ಣ ಖಂಡ್ರೆ, ನಟ ಶ್ರೀನಾಥ್, ಸಾಹಿತಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ, ಸಾಹಸ ಶಿಕ್ಷಣ ನೀಡುತ್ತಿರುವ ನೊಮಿಟೊ ಕಾಮದಾರ್ ಮತ್ತು ಡಾ.ಎಸ್.ಎಲ್.ಎನ್.ಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ. ಸಿದ್ದು ನ್ಯಾಮೇಗೌಡ ಅವರಿಗೆ ಮರಣೋತ್ತರವಾಗಿ ಈ ಪ್ರಶಸ್ತಿ ನೀಡಲಾಗುತ್ತಿದೆ’ ಎಂದು ಶಿವಮೂರ್ತಿ ಮುರುಘಾ ಶರಣರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.