ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದ್ರೋಣ’ನಾದ ಶಿವಣ್ಣ

Last Updated 14 ಜೂನ್ 2018, 11:33 IST
ಅಕ್ಷರ ಗಾತ್ರ

ಮಹದೇವ ಬಿ., ಸಂಗಮೇಶ.ಬಿ., ಶೇಶು ಚಕ್ರವರ್ತಿ ಕೂಡಿ ನಿರ್ಮಿಸುತ್ತಿರುವ ‘ದ್ರೋಣ’ ಚಿತ್ರವು ಇದೇ 22ರಿಂದ ಆರಂಭಗೊಳ್ಳಲಿದೆ. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನವನ್ನು ಪ್ರಮೋದ್ ಚಕ್ರವರ್ತಿ ಮಾಡುತ್ತಿದ್ದಾರೆ. ಜೆ.ಎಸ್. ವಾಲಿ ಛಾಯಾಗ್ರಹಣ, ರಾಮ್ ಕ್ರಿಶ್ ಸಂಗೀತ ಈ ಚಿತ್ರಕ್ಕಿದೆ.

ಶಿವರಾಜ್ ಕುಮಾರ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದಲ್ಲಿ ಇನಿಯಾ, ಸ್ವಾತಿ ಶರ್ಮ, ರಂಗಾಯಣ ರಘು, ವಿ ಮನೋಹರ್, ಸಾಧುಕೋಕಿಲ, ಬಾಬು ಹಿರಣ್ಣಯ್ಯ, ಶಂಕರ್ ರಾವ್, ವಿಜಯಕಿರಣ್, ರೇಖಾದಾಸ್, ಪ್ರಕಾಶ್ ಹೆಗ್ಗೋಡು, ಆನಂದ್ ನಟಿಸುತ್ತಿದ್ದಾರೆ.

*
ಮುಂದಿನ ತಿಂಗಳಲ್ಲಿ ತೆರೆಗೆ ‘ವಾಸು...’
‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರದ ಮೊದಲ ಪ್ರತಿ ಸಿದ್ಧವಾಗಿದ್ದು, ಮುಂದಿನ ತಿಂಗಳು ಬಿಡುಗಡೆ ಮಾಡಲು ತಂಡ ಸಜ್ಜಾಗಿದೆ. ಅಜಿತ್ ವಾಸನ್ ಉಗ್ಗಿನ ನಿರ್ದೇಶನ, ದಿಲಿಪ್ ಚಕ್ರವರ್ತಿ ಛಾಯಾಗ್ರಹಣ, ಅನೀಷ್ ಲೋಕನಾಥ ಸಂಗೀತ ಈ ಚಿತ್ರಕ್ಕಿದೆ.

ಅನೀಶ್ ತೇಜೇಶ್ವರ್, ನಿಶ್ವಿಕಾ ನಾಯ್ಡು, ಅವಿನಾಶ್, ಮಂಜುನಾಥ ಹೆಗಡೆ, ಅರುಣಾ ಬಾಲರಾಜ್, ಗಿರೀಶ್, ದೀಪಕ್ ಶೆಟ್ಟಿ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ.‌

*
ಬೆಟ್ಟದಲ್ಲಿ ‘ಗಹನ’
ಆರ್. ಶ್ರೀನಿವಾಸ್ ನಿರ್ಮಾಣದ ‘ಗಹನ’ ಚಿತ್ರವು ತಡಿಯಾಂಡಮೋಳ್‌ ಬೆಟ್ಟದ ಮೇಲೆ ನಡೆಯುತ್ತಿದೆ. ನಾಯಕ– ನಾಯಕಿ ಅಭಿನಯಿಸಿದ ದೃಶ್ಯಗಳು ಚಿತ್ರೀಕರಣವಾದವು. ಈ ಚಿತ್ರದ ಕಥೆ ಚಿತ್ರಕಥೆ ಸಂಭಾಷಣೆ, ನಿರ್ದೇಶನವನ್ನು ಪ್ರೀತ್ ಹಾಸನ್ ಮಾಡಿದ್ದಾರೆ. ಸಾಯಿ ಶ್ರೀನಿವಾಸ್ ಛಾಯಾಗ್ರಹಣ, ರಘು ಸಂಗೀತ ಈ ಚಿತ್ರಕ್ಕಿದೆ. ಆದಿತ್ಯಶೆಟ್ಟಿ, ಶರಣ್ಯಾ ಗೌಡ, ರಂಜಿನಿ, ಶಿವು ಇಂಚರ ಭೀಮಯ್ಯ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸೈಕಲಾಜಿಕಲ್ ಥ್ರಿಲ್ಲರ್ ಕಥಾವಸ್ತುವುಳ್ಳ ಚಿತ್ರದ ಚಿತ್ರೀಕರಣ, ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು ಮಡಿಕೇರಿ ಸುತ್ತಮುತ್ತ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT