ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎನ್ಸಿಯ ಹಿರಿಯ ಉಪಾಧ್ಯಕ್ಷ ಮುಜಾಫ್ಫರ್ ಶಾ, ‘ಸುಪ್ರೀಂ ಕೋರ್ಟ್ನ ಈ ತೀರ್ಪು ಸಂಪೂರ್ಣವಾಗಿಲ್ಲ ಸರಿಯಿಲ್ಲ ಎಂದು ಕಾನೂನು ಮತ್ತು ಸಂವಿಧಾನದ ತಜ್ಞರು ಹೇಳುತ್ತಿದ್ದಾರೆ. ಹಲವು ಮೂಲಭೂತ ವಿಚಾರಗಳ ಕುರಿತು ನ್ಯಾಯಾಲಯವು ಮೌನ ವಹಿಸಿದೆ. ಈ ಕುರಿತ ಮರುಪರಿಶೀಲನಾ ಅರ್ಜಿ ಸಿದ್ಧಪಡಿಸಲಾಗುತ್ತಿದ್ದು, ಅದು ಸಿದ್ಧಗೊಂಡ ಬಳಿಕ ನಮ್ಮ ಕಾನೂನು ತಜ್ಞರು ಮತ್ತು 23 ಅರ್ಜಿದಾರರ ಜೊತೆ ಚರ್ಚಿಸುತ್ತೇವೆ. ಶೀಘ್ರದಲ್ಲೇ ಸುಪ್ರೀಂ ಕೋರ್ಟ್ಗೆ ಅರ್ಜಿಯನ್ನು ಸಲ್ಲಿಸುತ್ತೇವೆ’ ಎಂದಿದ್ದಾರೆ.