ನವದೆಹಲಿ: ಉತ್ತರ ಪ್ರದೇಶದ ಬುಲಂದ್ ಶಹರ್ ಲೋಕಸಭಾ ಕ್ಷೇತ್ರದ ಶಿಕಾರ್ಪುರ್ ಪ್ರದೇಶದಲ್ಲಿ ದಲಿತ ಯುವಕನೊಬ್ಬ ಮತಯಂತ್ರದಲ್ಲಿ ಬಟನ್ ಒತ್ತಿ ತಾನು ಮತ ಚಲಾವಣೆ ಮಾಡಿದ್ದು ಬಿಎಸ್ಪಿಗೆ ಅಲ್ಲ, ಬಿಜೆಪಿಗೆ ಎಂದು ಅರಿತ ಕೂಡಲೇ ಸಿಟ್ಟಿನಿಂದ ಕೈ ಬೆರಳು ಕತ್ತರಿಸಿದ ಘಟನೆ ನಡೆದಿದೆ.
ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನದಲ್ಲಿ ಇಲ್ಲಿನ ಅಬ್ದುಲ್ಲಾಪುರ್ ಹುಲಾಸನ್ ಗ್ರಾಮದ ನಿವಾಸಿ ಪವನ್ ಕುಮಾರ್ ಎಂಬ ದಲಿತ ಯುವಕ ಮತದಾನ ಮಾಡಿದ್ದನು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.