ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ನಾಯ್ಡು ಅವರ ಟಿಡಿಪಿಗೆ ಹಿನ್ನಡೆ ಆಗಲಿದೆ. ವೈಎಸ್ಆರ್ ಕಾಂಗ್ರೆಸ್ ಪಕ್ಷವೇ ಮುಂದಿನ ಸರ್ಕಾರ ರಚಿಸಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಅಂದಾಜಿಸಿವೆ. ಹಾಗಿದ್ದರೂ, ಬಿಜೆಪಿ ವಿರೋಧಿ ಪಕ್ಷಗಳ ಮೈತ್ರಿಕೂಟ ಕಟ್ಟಲು ನಾಯ್ಡು ಅವರು ಶ್ರಮಿಸುತ್ತಿದ್ದಾರೆ. ನಾಯ್ಡು ಅವರ ಪಕ್ಷವೇ ಆಂಧ್ರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದು ಕೇಂದ್ರದಲ್ಲಿ ನರೇಂದ್ರ ಮೋದಿ ಅವರೇ ಪ್ರಧಾನಿಯಾದರೆ ಕೇಂದ್ರದ ಜತೆಗೆ ಆಂಧ್ರ ಪ್ರದೇಶದ ಸಂಬಂಧ ಇನ್ನಷ್ಟು ಸಂಕೀರ್ಣಗೊಳ್ಳಬಹುದು. ಹಾಗೆಯೇ, ಲೋಕಸಭೆಯಲ್ಲಿ ಟಿಡಿಪಿಯ ಸ್ಥಾನಗಳು ಕಡಿಮೆಯಾದರೆ ವಿರೋಧ ಪಕ್ಷಗಳ ಕೂಟದಲ್ಲಿಯೂ ನಾಯ್ಡು ಅವರ ಪ್ರಭಾವ ಕುಸಿಯಬಹುದು.