ಅವೈಜ್ಞಾನಿಕ ರಸ್ತೆ: ಕೊಡಗಿನಲ್ಲಿ ಬೆಟ್ಟಗಳನ್ನು ಕಡಿದು ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಲಾಗಿದೆ. ರಸ್ತೆ ನಿರ್ಮಾಣಕ್ಕೆ ಯಾವುದೇ ತಂತ್ರ ಪಾಲಿಸಿಲ್ಲ. ಮನೆ, ಹೋಟೆಲ್, ರೆಸಾರ್ಟ್, ಹೋಂ ಸ್ಟೇ, ಕಾಫಿ ತೋಟ ನಿರ್ಮಾಣಕ್ಕೆ ನೈಸರ್ಗಿಕ ಬೆಟ್ಟಗಳನ್ನು ಮಾರ್ಪಾಡು ಮಾಡಲಾಗಿದೆ. ಭೌಗೋಳಿಕ ಸ್ವರೂಪವೇ ಬದಲಾಗಿದ್ದು ಮಹಾಮಳೆಯ ನೀರು ಏಕಾಏಕಿ ನುಗ್ಗಿದ ಪರಿಣಾಮವಾಗಿ ಬೆಟ್ಟಕ್ಕೆ ಹಾನಿಯಾಗಿರುವ ಸಾಧ್ಯತೆಯಿದೆ. ಬೆಟ್ಟಗಳಲ್ಲಿ ಆಧುನಿಕ ವ್ಯವಸ್ಥೆ ಮಾಡಿಕೊಂಡಿರುವುದೂ ದೊಡ್ಡ ಪ್ರಮಾಣದ ದುರಂತಕ್ಕೆ ಕಾರಣ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.