ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಸಚಿವ ಸ್ಥಾನ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ ಎಂದು ಪತ್ರಕರ್ತರು ಹೇಳಿದಾಗ, 'ಅದರಲ್ಲೇನು ತಪ್ಪಿದೆ? ಅವರು ಯುವಕರಿದ್ದಾರೆ. ಅವರು ನನ್ನ ಶಿಷ್ಯರು. ನಾವು ಪ್ರಯತ್ನ ಮಾಡಬೇಕು, ಕಾಯಕವೇ ಕೈಲಾಸ. ಫಲ ಸಿಗುವುದರಲ್ಲಿ ಪ್ರಯತ್ನದೊಂದಿಗೆ ದೈವೀ ಕೃಪೆಯೂ ಇರಬೇಕು’ ಎಂದು ಹೇಳಿದರು.