ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಗೀತೆ ಮೊದಲ, ಕೊನೆ ಚರಣ ಸಾಕು: ಹಂಪನಾ

Last Updated 15 ಡಿಸೆಂಬರ್ 2022, 10:23 IST
ಅಕ್ಷರ ಗಾತ್ರ

ತುಮಕೂರು: ನಾಡಗೀತೆಯಲ್ಲಿ ಹಲವು ಚರಣಗಳಿದ್ದು, ಅದರ ಮೊದಲ ಹಾಗೂ ಕೊನೆಯ ಚರಣ ಹಾಡಿದರೆ ಸಾಕು ಎಂದು ಸಾಹಿತಿ ಡಾ.ಹಂ.ಪ.ನಾಗರಾಜಯ್ಯ ಇಲ್ಲಿ ಗುರುವಾರ ಸಲಹೆ ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ‘ನಾಡಗೀತೆಯನ್ನು ಪೂರ್ಣವಾಗಿ ಹಾಡಲು 2 ನಿಮಿಷ 30 ಸೆಕೆಂಡು ತೆಗೆದುಕೊಳ್ಳುತ್ತದೆ. ಅದರ ಬದಲು ಮೊದಲ ಹಾಗೂ ಕೊನೆಯ ಚರಣಗಳನ್ನು 50 ಸೆಕೆಂಡುಗಳಲ್ಲಿ ಹಾಡಿ ಮುಗಿಸಬಹುದು’ ಎಂದು ಹೇಳಿದರು.

ರಾಷ್ಟ್ರಗೀತೆಯನ್ನು 52 ಸೆಕೆಂಡುಗಳಲ್ಲಿ ಹಾಡಲಾಗುತ್ತಿದೆ. ಇತರೆ ದೇಶಗಳಲ್ಲೂ ರಾಷ್ಟ್ರಗೀತೆ, ನಾಡಗೀತೆಯನ್ನು 40ರಿಂದ 50 ಸೆಕೆಂಡುಗಳಲ್ಲಿ ಹಾಡಲಾಗುತ್ತಿದೆ. ಅಂತಹ ಪದ್ಧತಿಯನ್ನು ನಮ್ಮಲ್ಲೂ ಅಳವಡಿಸಿಕೊಂಡರೆ ಪರಿಣಾಮಕಾರಿಯಾಗಿ ಇರುತ್ತದೆ. ನಾಡಗೀತೆ ನಾಡಿನ ಸಮಸ್ತ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಹಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುವುದರಿಂದ ಎರಡು ಚರಣ ಹಾಡಿ ಸಮಯ ಉಳಿಸಬಹುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT