ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಮಲತಾ ಮಾದರಿ ನಡೆ

Last Updated 11 ಮಾರ್ಚ್ 2019, 20:29 IST
ಅಕ್ಷರ ಗಾತ್ರ

ರಾಜಕೀಯ ಮುಖಂಡರು ಈಗ ವಿರೋಧಿಗಳನ್ನು ಮನಸೋಇಚ್ಛೆ ಲೇವಡಿ ಮಾಡುವುದು, ಮರ್ಯಾದೆ ಮೀರಿದ ಪದಗಳನ್ನು ಪ್ರಯೋಗಿಸುವುದು, ವೈಯಕ್ತಿಕವಾಗಿ ಟೀಕಿಸುವುದು ಸಾಮಾನ್ಯವಾಗಿದೆ. ಅವರ ಮಾತಿನ ಉದ್ದೇಶಿತ ಅರ್ಥವೇ ಒಂದಿದ್ದರೆ ಜನರಿಗೆ ತಲುಪುವುದು ಮತ್ತೊಂದು ರೀತಿ. ಇಂತಹ ವಿಷಮಯ ವಾತಾವರಣದಲ್ಲಿ ಹಿತವಾಗಿ ಮಾತನಾಡುವವರೂ ಇದ್ದಾರೆ.

ಎದುರಾಳಿಯನ್ನು ತಮ್ಮ ಅಭಿಮಾನಿಗಳು ನಿಂದಿಸಿದರೆ ‘ನಿಂದಿಸಬೇಡಿ, ಅವರ ತಾಯಿಗೆ ನೋವಾಗುತ್ತದೆ. ಅವರೂ ನನ್ನ ಮಗನಿದ್ದಂತೆ’ ಎಂದು ತಡೆಯುವ ಸುಮಲತಾ ಅವರಂತಹ ರಾಜಕೀಯ ವ್ಯಕ್ತಿಗಳೂ ಇದ್ದಾರೆ ಎಂದರೆ ನಂಬಲು ಆಗುವುದಿಲ್ಲ. ರಾಜಕೀಯಕ್ಕೆ ಹೊಸಬರಾದರೂ ಗಂಡನ ಜೊತೆ ಜೊತೆಗೇ ಇದ್ದು ಅಂಬರೀಷ್‌ ಅವರ ದೊಡ್ಡಸ್ತಿಕೆಯನ್ನು ಮೈಗೂಡಿಸಿಕೊಂಡಿದ್ದಾರೆ.

ಮಂಡ್ಯ ಜಿಲ್ಲೆಯ ಯೋಧರೊಬ್ಬರು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದಾಗ ರಾಜಕೀಯ ಮುಖಂಡರು ಭಾಷ್ಪಾಂಜಲಿ ಅರ್ಪಿಸಿದರೆ, ಸುಮಲತಾ ಒಂದಿಷ್ಟು ಸ್ಥಳವನ್ನೇ ಆ ಕುಟುಂಬಕ್ಕೆ ಕೊಟ್ಟು ಔದಾರ್ಯ ತೋರಿದರು. ಸುಸಂಸ್ಕೃತ ನಡೆ–ನುಡಿಯಿಂದ ಅವರು ತೋರಿಸುತ್ತಿರುವ ಹೃದಯವಂತಿಕೆ ಅಚ್ಚರಿ ಮೂಡಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT