ಮತ ನೋಂದಣಿ ಮಾಡಿಕೊಳ್ಳಿ ಎನ್ನುವುದು, ನಂತರ ಮತದಾನದ ಪ್ರಮಾಣ ಕಡಿಮೆಯಾಗಿದೆ ಎಂದು ಗೋಳಾಡುವುದರ ಬದಲು, ಆ ದಿನ ಮತದಾನದ ಸಮಯದಲ್ಲಿ ಟಿ.ವಿ, ಚಿತ್ರಮಂದಿರ ಮುಂತಾದ ಮನರಂಜನಾ ಸಾಧನಗಳನ್ನು ಸಹ ಬಂದ್ ಮಾಡಬೇಕು. ಹಾಗೆಯೇ ನಿರಂತರವಾಗಿ ಎರಡು ಸಾರ್ವತ್ರಿಕ ಚುನಾವಣೆಗಳಲ್ಲಿ ಮತ ಚಲಾಯಿಸದವರಿಗೆ, ಸಾರ್ವಜನಿಕ ಸೌಲಭ್ಯಗಳನ್ನು (ಅಡುಗೆ ಅನಿಲ, ಚಾಲನಾ ಪರವಾನಗಿ, ದೂರವಾಣಿ ಸೌಲಭ್ಯ, ವಿದ್ಯುತ್ ಸೌಲಭ್ಯ, ವಿದೇಶಿ ಪ್ರಯಾಣ, ಸಾಲ ಸೌಲಭ್ಯ ಸಬ್ಸಿಡಿ ಇತ್ಯಾದಿ) ಹಂತಹಂತವಾಗಿ ಹಿಂಪಡೆಯಬೇಕು. ದೇಶದ ಹಿತಚಿಂತನೆ ಮಾಡದವರಿಗೆ ಪುಗಸಟ್ಟೆ ಸವಲತ್ತುಗಳನ್ನು ಯಾಕೆ ನೀಡಬೇಕು?