ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ‘ಲಂಚ ನೀಡದೆ ಕೆಲಸವಾಗುವುದಿಲ್ಲ’ ಎಂಬುದು ನಮ್ಮ ದೇಶದ ಸಾರ್ವಕಾಲಿಕ ಸತ್ಯ. ಎರಡೂ ಕೈ ಸೇರಿದರೆ ತಾನೆ ಚಪ್ಪಾಳೆ? ಹೀಗಿದ್ದೂ, ಲಂಚ ತೆಗೆದುಕೊಂಡವರ ಬಗ್ಗೆ ಕರುಣೆ ತೋರಿ, ಕೊಟ್ಟವರನ್ನು ಜೈಲಿಗೆ ತಳ್ಳುವುದು ಯಾವ ನ್ಯಾಯ? ಅದೂ ಅಲ್ಲದೆ, ಲಂಚವನ್ನು ಕೊಟ್ಟ ನಂತರ, ‘ಇಂತಹ ಅಧಿಕಾರಿ ನನ್ನಿಂದ ಲಂಚ
ಪಡೆದಿದ್ದಾರೆ’ ಎಂದು ‘ಭ್ರಷ್ಟಾಚಾರ ತಡೆ ಘಟಕ’ಕ್ಕೆ ಮಾಹಿತಿ ನೀಡಬೇಕು. ಆಗ ಅಂಥವರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗುವುದಿಲ್ಲ. ಆದರೆ, ಈ ಭ್ರಷ್ಟಾಚಾರ ತಡೆ ಘಟಕದ ಅಧಿಕಾರಿಗಳು ಲಂಚ ಪಡೆಯುವುದಿಲ್ಲ ಎನ್ನುವುದಕ್ಕೆ ಯಾವ ಗ್ಯಾರಂಟಿ ಇದೆ ಸ್ವಾಮಿ?