‘ಸರ್ಕಾರ ಅಸ್ಥಿರ ಯತ್ನ ಬೇಡ’ (ಪ್ರ.ವಾ., ಆ.12)ಸುದ್ದಿ ಓದಿ, ‘ನಗೆಯು ಬರುತಿದೆ ನನಗೆ ನಗೆಯು ಬರುತಿದೆ’ ಎಂಬ ಪುರಂದರದಾಸರ ಹಾಡು ನೆನಪಾಯಿತು. ಆಳುವ ಪಕ್ಷಕ್ಕೆ ವಿರೋಧ ಪಕ್ಷದಿಂದ ಅಸ್ಥಿರತೆಯ ಅಪಾಯವಿರುತ್ತದೆ. ಇಲ್ಲಿ, ಆಡಳಿತ ಹಂಚಿಕೊಂಡಿರುವವರಿಂದಲೆ ಅಪಾಯದ ಮುನ್ಸೂಚನೆ ಇರುವ ಕಾರಣ ಇಂಥ ಕಿವಿಮಾತು ಅನಿವಾರ್ಯವಾಗಿರಬಹುದು ಎಂಬುದು ಕೆಲವರ ಕುಹಕ.