ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಧೀಶರನ್ನು ನೇಮಿಸಿ

Last Updated 13 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಮೈಸೂರಿನ ಪ್ರಧಾನ ಎರಡನೇ ಸಿವಿಲ್ ಜಡ್ಜ್ ಹಾಗೂಜೆಎಂಎಫ್‌ಸಿ ಮತ್ತು ಹೆಚ್ಚುವರಿ ಎರಡನೇ ಸಿವಿಲ್ ಜಡ್ಜ್ಹಾಗೂ ಜೆಎಂಎಫ್‌ ನ್ಯಾಯಾಲಯಗಳಲ್ಲಿರುವ ಪ್ರಕರಣಗಳು ಫ್ರಿಜ್‌ನಲ್ಲಿಟ್ಟ ತರಕಾರಿಗಳಂತಾಗಿವೆ. ಬೆಳೆಯುವುದೂ ಇಲ್ಲ, ಕೊಳೆಯುವುದೂ ಇಲ್ಲ! ಒಂಬತ್ತು ತಿಂಗಳಿಂದ ಇಲ್ಲಿ ನ್ಯಾಯಾಧೀಶರೇ ಇಲ್ಲದಿರುವುದು ಇದಕ್ಕೆ ಕಾರಣ.

ಈ ಎರಡೂ ನ್ಯಾಯಾಲಯಗಳಲ್ಲಿ ಸಾವಿರಾರು ಪ್ರಕರಣಗಳಿವೆ. ಈ ನ್ಯಾಯಾಲಯಗಳಿಗೆ ಸುಂದರ ನ್ಯಾಯಾಂಗಣಗಳಿವೆ, ಪೀಠೋಪಕರಣಗಳಿವೆ, ಶಿರಸ್ತೇದಾರರು, ಸಿಬ್ಬಂದಿ, ವಕೀಲರೂ ಸೇರಿ ಎಲ್ಲ ಅಗತ್ಯ ಸೌಲಭ್ಯಗಳೂ ಇವೆ. ನ್ಯಾಯಾಧೀಶರದ್ದೇ ಕೊರತೆ.

ಈ ನ್ಯಾಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದನ್ಯಾಯಾಧೀಶರು ವರ್ಗಾವಣೆಯಾಗಿ ಒಂಬತ್ತು ತಿಂಗಳಾಗಿದೆ. ಇದರಿಂದಾಗಿ ಇಲ್ಲಿ ಉಳಿಯುವ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರುತ್ತಿದೆ. ಈ ನ್ಯಾಯಾಲಯಗಳಿಗೆ ಆದಷ್ಟು ಬೇಗ ನ್ಯಾಯಾಧೀಶರನ್ನು ನೇಮಿಸಿ ಜನರಿಗೆ ನ್ಯಾಯ ಒದಗಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT