ಇತ್ತೀಚೆಗೆ ಗೋವಾ ಸರ್ಕಾರ, ಬೈನಾ ಬೀಚ್ ಬಳಿ ನೆಲೆಸಿದ್ದ 205 ಕನ್ನಡಿಗ ಕುಟುಂಬಗಳ ಮನೆಗಳನ್ನು ನೆಲಸಮ ಮಾಡಿ ಅವರನ್ನು ನಿರಾಶ್ರಿತರನ್ನಾಗಿ ಮಾಡಿದೆ. ಈ ಅಮಾನವೀಯ ಘಟನೆ ಖಂಡನಾರ್ಹ.
ಪಾಕಿಸ್ತಾನದಲ್ಲಿ ಹಿಂದೂಗಳ ಬಗ್ಗೆ ಅಲ್ಲಿನ ಸರ್ಕಾರ ವರ್ತಿಸಿದಂತೆ ಗೋವಾ ಸರ್ಕಾರ ಕನ್ನಡಿಗರ ಮೇಲೆ ದೌರ್ಜನ್ಯ ಮಾಡಿದೆ. ನಮ್ಮ ಮುಖ್ಯಮಂತ್ರಿ ಕೂಡಲೇ ಗೋವಾಕ್ಕೆ ತೆರಳಿ ಅಲ್ಲಿಯ ಸರ್ಕಾರದೊಂದಿಗೆ ಮಾತನಾಡಿ, ಬೈನಾ ಸಂತ್ರಸ್ತರ ಪುನರ್ವಸತಿಗೆ ವ್ಯವಸ್ಥೆ ಮಾಡಬೇಕು. ಅವರಲ್ಲಿ ಬದುಕಿನ ಬಗ್ಗೆ ಮೂಡಿರುವ ಭಯವನ್ನು ಹೋಗಲಾಡಿಸಿ ನೆಮ್ಮದಿಯ ವಾತಾವರಣ ಕಲ್ಪಿಸಬೇಕು.