ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಔದಾರ್ಯ ಅನುಕರಣೀಯ

Last Updated 6 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಕಾದಂಬರಿಕಾರ ಎಸ್.ಎಲ್. ಭೈರಪ್ಪನವರು ತಮಗೆ ಸಂದ ‘ಡಾ. ಬೆಟಗೇರಿ ಕೃಷ್ಣಶರ್ಮ ಕಾದಂಬರಿ ಪ್ರಶಸ್ತಿ’ ಹಣವನ್ನು ಪ್ರಶಸ್ತಿ ನೀಡುವ ಬೆಳಗಾವಿಯ ಡಾ.ಬೆಟಗೇರಿ ಕೃಷ್ಣ­ಶರ್ಮ ಸ್ಮಾರಕ ಟ್ರಸ್ಟ್‌ಗೇ  ಹಿಂದಿರುಗಿಸಿ ಕನ್ನಡ ಚಟು­ವ­ಟಿಕೆಗಳಿಗೆ ಬಳಸಿ ಎಂದು ಹೇಳಿರುವುದು ಸ್ವಾಗ­ತಾರ್ಹ (ಪ್ರ.ವಾ.,ಜುಲೈ 31). ಈ ಹಿಂದೆಯೂ ಭೈರಪ್ಪನವರು ತಮಗೆ ಬಂದ ಪ್ರಶಸ್ತಿ­ ಹಣವನ್ನು ಆಯಾ ಸಂಸ್ಥೆಗಳಿಗೇ ಹಿಂದಿರುಗಿಸಿದ್ದಾರೆ. ಇದೊಂದು ಅನುಕರಣೀಯ ಆದರ್ಶ.

ಭೈರಪ್ಪನವರು ಶ್ರೀಮಂತರೇನಲ್ಲ; ಅವರದು ಶ್ರೀಮಂತಿಕೆಯ ಜೀವನವೂ ಅಲ್ಲ. ಆದರೆ ಅವರ ಹೃದಯ ಶ್ರೀಮಂತಿಕೆ ದೊಡ್ಡದು. ಇಂಥವರು ಯಾವ ಭಾಷೆಗಾದರೂ ಭೂಷಣರು. ಅವರು ಕನ್ನಡದವರು ಎಂಬುದು ನಮ್ಮ ಹೆಮ್ಮೆ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT