ಕೆಲ ತಿಂಗಳ ಹಿಂದೆ ಈರುಳ್ಳಿ ಬೆಲೆ ಗಗನಕ್ಕೇರಿತ್ತು. ಕೊಳ್ಳುವವರು ಕಣ್ಣೀರಿಡುವ ಸ್ಥಿತಿ ಬಂದೊದಗಿತ್ತು. ಈಗ ಕಾಲ ಬದಲಾಗಿದೆ. ಈರುಳ್ಳಿ ಬೆಲೆ ಪಾತಾಳ ಮುಖಿಯಾಗಿದೆ. ಹೀಗಾದರೆ ನೇಗಿಲಯೋಗಿ ಬದುಕುವುದೆಂತು?
ಆತ ಸಾಲದ ಸುಳಿಯಲ್ಲಿ ಸಿಕ್ಕಿ ನೇಣಿಗೆ ಕೊರಳೊಡ್ಡುವ ಮುನ್ನ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈರುಳ್ಳಿಗೆ ಬೆಂಬಲ ಬೆಲೆ ಘೋಷಿಸಿ ರೈತರ ನೆರವಿಗೆ ಧಾವಿಸಬೇಕಾದುದು ಈಗಿನ ಅಗತ್ಯ.