ಟಿಪ್ಪು ಸುಲ್ತಾನನ ಮರಣಕ್ಕೂ, ಭಾರತ ಸ್ವತಂತ್ರವಾದ ಕಾಲಕ್ಕೂ 148 ವರ್ಷಗಳ ಅಂತರವಿದೆ! ಆಗ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ನಿಜ ಹೋರಾಟಗಾರರಾದ ಗಾಂಧಿ, ನೆಹರೂ, ತಿಲಕ್, ವಲ್ಲಭಭಾಯಿ ಪಟೇಲ್, ಸುಭಾಷ ಚಂದ್ರ ಬೋಸ್, ಭಗತ್ ಸಿಂಗ್ ಮೊದಲಾದವರು ಟಿಪ್ಪುವಿನ ಮರಣಾನಂತರ ಜನಿಸಿದವರು. ಸ್ವಾತಂತ್ರ್ಯದ ಪರಿಕಲ್ಪನೆ, ಅದರ ಮಹತ್ವದ ಅರಿವನ್ನು ಮೊಟ್ಟ ಮೊದಲು ಮೂಡಿಸಿದವರೇ, ಈ ನಿಜ ನಾಯಕರು.
ಬ್ರಿಟಿಷರ ವಿರುದ್ಧ ಟಿಪ್ಪು ಹೋರಾಡಿದ್ದು, ಕೇವಲ ತನ್ನ ಅರಸೊತ್ತಿಗೆಯ ಉಳಿವಿಗಾಗಿ ಎಂಬುದನ್ನು ಇತಿಹಾಸ ಸಾರುತ್ತಿದೆ. ಭಾರತವನ್ನು ಬ್ರಿಟಿಷ್ ಆಡಳಿತದಿಂದ ಮುಕ್ತಗೊಳಿಸಿ, ಸ್ವತಂತ್ರ ಹಾಗೂ ಪ್ರಜಾಪ್ರಭುತ್ವ ಮಾದರಿಯ ರಾಷ್ಟ್ರವನ್ನಾಗಿ ಮಾಡಬೇಕೆಂಬ ಉದ್ದೇಶ, ಯುದ್ಧ
ಮಾಡುವಾಗ ಟಿಪ್ಪುವಿನದಾಗಿತ್ತೇ?