ದೆಹಲಿಯಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ. 7 ವರ್ಷದ ಬಾಲೆ ಮೇಲೆ ಲೈಂಗಿಕ ದೌರ್ಜನ್ಯ ಓದಿ ಮನಸ್ಸು ನಡುಗಿತು. ಕೋಲ್ಕತ್ತ ಸಾಮೂಹಿಕ ಅತ್ಯಾಚಾರದಲ್ಲಿ ಪಾಲ್ಗೊಂಡಿದ್ದ ಮೂವರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ ಸುದ್ದಿ ಓದಿ ಖುಷಿಪಟ್ಟ ಎರಡೇ ದಿನಗಳಲ್ಲಿ ಇಂತಹ ಪ್ರಕರಣ ಮರುಕಳಿಸಿದ್ದು ನೋವಿನ ಸಂಗತಿ.
ಹೆಣ್ಣು ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬಂದು ಶಿಕ್ಷಣ ಪಡೆದು ಬಾಳುವ ಮುನ್ನವೇ ಕಾಮಾಂಧರ ಕಪಿಮುಷ್ಟಿಗೆ ಸಿಕ್ಕಿ ತತ್ತರಿಸುತ್ತಿದ್ದಾರೆ. ಸಾಮೂಹಿಕ ಅತ್ಯಾಚಾರ ಶಬ್ದವೇ ಹೆಣ್ಣು ಹೆತ್ತವರ ಒಡಲಿಗೆ ಕಿಚ್ಚು ಹಚ್ಚುತ್ತಿದೆ. ನಿರ್ಭಯಾ ಪ್ರಕರಣ ಘಟಿಸಿ ಮೂರನೇ ವರ್ಷ ಕಳೆಯುತ್ತಿದ್ದರೂ ರೇಪ್ ರಾಜಧಾನಿ ಎಂಬ ಕುಖ್ಯಾತಿಯಿಂದ ದೆಹಲಿ ಹೊರ ಬಂದಿಲ್ಲ.
ಅತ್ಯಾಚಾರಿಗಳಿಗೆ ಭಯವೇ ಇಲ್ಲದಂತಾಗಿದೆ. ಹಾಡಹಗಲೇ ಇಂತಹ ಪ್ರಕರಣಗಳು ನಡೆಯುತ್ತಿವೆ. ಈ ದೌರ್ಜನ್ಯಗಳಿಗೆ ಕೊನೆ ಇಲ್ಲವೇ? ಹೆಣ್ಣು ಮಕ್ಕಳಿಗೆ ಉತ್ತಮ ಯೋಜನೆಗಳನ್ನು ಜಾರಿಗೊಳಿಸಿದ ಸರ್ಕಾರ, ಅವರ ಸುರಕ್ಷತೆಗಾಗಿ ಇನ್ನಷ್ಟು ಕಠಿಣ ಕಾನೂನುಗಳನ್ನು ಜಾರಿಗೊಳಿಸಲಿ. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಜಾರಿಯಾದಾಗ ಮಾತ್ರ ಇಂಥ ಪ್ರಕರಣಗಳನ್ನು ತಡೆಯಬಹುದು.