ಸಮಾಜದಲ್ಲಿ ಎಲ್ಲರಿಗೂ ತಮ್ಮದೇ ಆದ ಗೌರವ ಇರುತ್ತದೆ. ಒಂದು ಗುಂಪಿನಲ್ಲಿ ಯಾರೋ ಒಬ್ಬರು ತಪ್ಪು ಮಾಡಿದರೂ ಇಡೀ ಗುಂಪಿಗೆ ಕೆಟ್ಟ ಹೆಸರು ಬರುತ್ತದೆ. ಸಮಾಜದಲ್ಲಿ ನಾವೂ ಎಲ್ಲರಂತೆ ಇರಲು ಅವಕಾಶ ಕೊಡಿ ಎಂದು ಆಗ್ರಹಿಸುವ ಲೈಂಗಿಕ ಅಲ್ಪಸಂಖ್ಯಾತರಿಗೂ ಇದು ಅನ್ವಯಿಸುತ್ತದೆ.
ಕೊಪ್ಪಳದಿಂದ ಬಳ್ಳಾರಿ ಮತ್ತು ಗುಂತಕಲ್ಗೆ ಹೋಗುವ ರೈಲುಗಳಲ್ಲಿ ಪ್ರಯಾಣಿಕರಿಗೆ ಲೈಂಗಿಕ ಅಲ್ಪಸಂಖ್ಯಾತರ ಕಾಟ ಹೇಳತೀರದಾಗಿದೆ. ಹಣ ಕೊಡದಿದ್ದರೆ ಕೆಟ್ಟದಾಗಿ ವರ್ತಿಸುತ್ತಾರೆ. ರೈಲಿನಲ್ಲಿ ಟೀ, -ಕಾಫಿ, ಬಿಸ್ಕತ್ತು, ಚಕ್ಕುಲಿಯಂತಹ ತಿನಿಸುಗಳನ್ನು, ಇತರ ವಸ್ತುಗಳನ್ನು ಮಾರುತ್ತಾ ಜೀವನ ಮಾಡುವ ಹಲವರಿದ್ದಾರೆ. ಅಂತೆಯೇ ಕಷ್ಟಪಟ್ಟು ದುಡಿಯಲು ಲೈಂಗಿಕ ಅಲ್ಪಸಂಖ್ಯಾತರಿಗೆ ಯಾಕಾಗದು? ಅವರಿಗೆ ಸಮಾಜದಲ್ಲಿ ಎಲ್ಲರಂತೆ ಇರಲು ಏನು ಮಾಡಬೇಕು ಎಂಬ ತಿಳಿವಳಿಕೆ ನೀಡುವ ಕಾರ್ಯಕ್ರಮಗಳನ್ನು ಸರ್ಕಾರ ಯೋಜಿಸಬೇಕು. ಪ್ರಯಾಣಿಕರಿಗೆ ನೆಮ್ಮದಿ ಕಲ್ಪಿಸಬೇಕು.