ಕಂಬಾಲಪಲ್ಲಿ ಪ್ರಕರಣ ಖಂಡಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆದವು. ಈ ಅಮಾನುಷ ಕೌರ್ಯದ ಬಗ್ಗೆ ಸಂಸತ್ತಿನಲ್ಲೂ ಚರ್ಚೆ ಆಗಿತ್ತು. ಈಗ ತೀರ್ಪು ಹೊರಬಿದ್ದ ಮೇಲೆ, ಬ್ರಿಟಿಷ್ ಭಾರತದಲ್ಲಿ ಕಾನೂನು, ಸುವ್ಯವಸ್ಥೆ ಕುರಿತು ಪಂಡಿತ್ ಮೋತಿಲಾಲ್ ನೆಹರೂ ಅವರು ಹೇಳಿದ ಮಾತು ನೆನಪಿಗೆ ಬಂದಿತು: ‘ಕಾನೂನು ಕತ್ತೆ ಇದ್ದ ಹಾಗೆ, ದುರ್ಬಲರನ್ನು ಅದು ಒದೆಯುತ್ತದೆ ಮತ್ತು ಸಬಲರು ಅದರ ಮೇಲೆ ಸವಾರಿ ಮಾಡುತ್ತಾರೆ’.
ಸ್ವಾತಂತ್ರ್ಯ ಬಂದು ೬೭ ವರ್ಷ ಕಳೆದರೂ ಮೋತಿಲಾಲರ ಆ ಮಾತು ಇಂದಿಗೂ ಅನ್ವಯಿಸುತ್ತಿದೆ ಎಂದರೆ, ಸ್ವಾತಂತ್ರ್ಯ ‘ಎಲ್ಲಿದೆ’ ಎಂಬುದು ಸ್ವಯಂವೇದ್ಯ.