ಕುವೆಂಪು ತಮ್ಮ ದಾರ್ಶನಿಕ ದೃಷ್ಟಿಯಿಂದ ಹೇಳಿರುವ ‘ಬರಿಯ ಚದರ ಮೈಲಿಗಳಲ್ತು ಕರ್ನಾಟಕ ವಿಸ್ತೀರ್ಣಂ, ನೆನೆನೆನೆ ಮನೋಮಯದ ಸಂಸ್ಕೃತಿಯ ಕೋಶ ವಿಸ್ತೀರ್ಣಮಂ. ಮರೆಯದಿರು ಚದರ ಸಂವತ್ಸರದ ಶತಮಾನಗಳ ಕಾಲ ವಿಸ್ತೀರ್ಣಮಂ, ಪ್ರಾಣಮಯ ಭಾವ ಪ್ರದೇಶ ವಿಸ್ತೀರ್ಣಮಂ ಚಿದಾಕಾಶ ವಿಜ್ಞಾನ ವಿಸ್ತೀರ್ಣಮಂ’ ಎಂಬ ಸಾಲುಗಳನ್ನು ಪಾಪು ತಮ್ಮ ಹೃದಯದ ಕಣ್ಣನ್ನು ತೆರೆದು ಪರಿಭಾವಿಸಬೇಕು. ನಾವೂ ರಾಜಕಾರಣಿಗಳಂತೆ ಮಾತನಾಡಬಾರದು.