ಸಂಕ್ರಮಣದ ಸುಗ್ಗಿಯ ಸಂದರ್ಭದಲ್ಲಿ ಪ್ರಧಾನಿಅವರು, ಫಸಲು ವಿಮಾ ಯೋಜನೆ ಪ್ರಕಟಿಸಿರುವುದು ಸ್ವಾಗತಾರ್ಹ. ರೈತರ ಹೆಸರಿನಲ್ಲಿ ಬಹುತೇಕ ಯೋಜನೆಗಳ ಲಾಭ ಬಾಚಿಕೊಳ್ಳುತ್ತಿರುವ ಮಧ್ಯವರ್ತಿಗಳ ತಂತ್ರಗಳಿಗೆ ಕಡಿವಾಣ ಹಾಕಬೇಕು.
ವಿಮೆ ಯೋಜನೆ, ಸಣ್ಣ ರೈತರಿಗೂ ಪರಿಣಾಮಕಾರಿಯಾಗಿ ತಲುಪುವಂತೆ ಮಾನದಂಡ ರೂಪಿಸುವಂತಾದರೆ ಮಾತ್ರ ಅದು ಸಾರ್ಥಕವಾಗುತ್ತದೆ.