ಪ್ರಜಾವಾಣಿಯ ‘ಅಭಿಮತ’ ಪುಟದ ‘50 ವರುಷಗಳ ಹಿಂದೆ’ ಅಂಕಣದಲ್ಲಿ (ಆ. 11) ಬೆಳಗಾವಿ ಗಡಿ ವಿಚಾರದಲ್ಲಿ ಅಂದಿನ ಮೈಸೂರು ರಾಜ್ಯದ ಸಂಸದರು ಕೇಂದ್ರ ಸರ್ಕಾರಕ್ಕೆ ಒತ್ತಾಯಪಡಿಸಿರುವುದು (ಗಡಿ ವಿವಾದವನ್ನು ಮತ್ತೆ ಎತ್ತಬಾರದೆಂದು) ಕೇವಲ ಸುದ್ದಿಯಾಗಿರದೇ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.
50 ವರುಷಗಳ ಬಳಿಕವೂ ಗಡಿ ವಿವಾದಕ್ಕೆ ಪೂರ್ಣ ವಿರಾಮ ಹಾಕದೇ ಗಡಿನಾಡಿನಲ್ಲಿ ಪದೇ ಪದೇ ಉದ್ವಿಗ್ನ ವಾತಾವರಣ ಉಂಟಾಗಲು ಆಸ್ಪದ ನೀಡುತ್ತಿರುವ ರಾಜ ಕಾರಣಿಗಳಿಗೆ ಈ ನಾಡಿನ ಒಟ್ಟಾರೆ ಹಿತದ ಬಗ್ಗೆ ಇರುವ ಕಾಳಜಿಯನ್ನು ಇದು ಬಿಂಬಿಸುತ್ತದೆ.
ಬಹುಶಃ ಇನ್ನೂ 50 ವರುಷಗಳು ಕಳೆದರೂ, ಪ್ರಜಾವಾಣಿಯಲ್ಲಿ ‘100 ವರುಷಗಳ ಹಿಂದೆ’ ಎಂಬ ವಿಶೇಷ ಅಂಕಣದಲ್ಲಿ ಮತ್ತೆ ಇದೇ ವಿಚಾರ ಪ್ರಸ್ತಾಪವಾದರೂ ಅತಿಶಯೋಕ್ತಿ ಏನಲ್ಲ. ಇನ್ನಾದರೂ ನಮ್ಮ ನಾಯಕರು ಇಂತಹ ವಿವಾದಗಳಿಗೆ ಕೊನೆ ಹಾಡಬೇಕು. ಉದ್ವೇಗದ ಮಾತುಗಳಿಂದ ಸಮಸ್ಯೆಗೆ ಪರಿಹಾರ ಸಿಕ್ಕದು.