ನಲ್ಲಿ, ಸ್ಯಾನಿಟರಿ, ವಿದ್ಯುಚ್ಛಕ್ತಿ ಲೇನ್, ದೂರವಾಣಿ ಇತ್ಯಾದಿ ಸಲುವಾಗಿ ರಸ್ತೆಗಳನ್ನು ಅನಧಿಕೃತವಾಗಿ ಅಗೆಯಲಾಗುತ್ತದೆ. ಆ ರೀತಿ ಅಗೆದ ಮೇಲೆ ಬಹುತೇಕ ಮುಚ್ಚಿ, ಡಾಂಬರೀಕರಣ ಹಾಕಿ, ಮೊದಲಿನ ಸ್ಥಿತಿಗೆ ತರುವಲ್ಲಿ ಸಂಬಂಧಪಟ್ಟವರು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ.ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಈಗಲಾದರೂ ಸಂಬಂಧಪಟ್ಟವರು ಕ್ರಿಯಾಶೀಲರಾಗಲು ವಿನಂತಿ.