ಇತ್ತೀಚೆಗೆ ಸಮಾಜದಲ್ಲಿ ಅಸಹಿಷ್ಣುತೆ ಪರಮಾವಧಿ ತಲುಪಿದ್ದು ಮನುಷ್ಯ–ಮನುಷ್ಯರಲ್ಲಿ ಅಪನಂಬಿಕೆ ಹಾಗೂ ದ್ವೇಷ ಸೃಷ್ಟಿಯಾಗುತ್ತಿದೆ. ಗೋಮಾಂಸ ಸೇವನೆಯ ಬಗ್ಗೆ ಅತೀವ ಚರ್ಚೆಯಾಗುತ್ತಿದ್ದು ಮಾಧ್ಯಮಗಳಲ್ಲಿ ಇದೊಂದು ಘೋರ ಸಾಮಾಜಿಕ ಸಮಸ್ಯೆ ಎಂಬಂತೆ ಬಿಂಬಿತವಾಗುತ್ತಿದೆ.
ಯಾರು ಏನಾದರೂ ತಿನ್ನಲಿ. ತಿಂದವರು ಅರಗಿಸಿಕೊಳ್ಳುತ್ತಾರೆ. ಇಷ್ಟವಿಲ್ಲದವರು ತಿನ್ನುವುದು ಬೇಡ. ತಿನ್ನುವ ಆಹಾರದ ಬಗ್ಗೆ ಈ ಮಟ್ಟದ ವಾದ–ವಿವಾದ ಅಗತ್ಯವೇ? ಇನ್ನಾದರೂ ಈ ಬಗ್ಗೆ ಚರ್ಚೆ ನಿಲ್ಲಿಸಿ, ಜನರ ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳತ್ತ ಮುಖಂಡರು ಹಾಗೂ ಜನರು ಗಮನಹರಿಸಲಿ. ಮಾಧ್ಯಮಗಳಲ್ಲಿ ವಿಚಾರ ಪ್ರಚೋದಕ ಹಿತಕರ ಚರ್ಚೆಗಳಿಗೆ ಒತ್ತು ದೊರೆಯಲಿ.