ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ಬಸ್ಸೊಂದರಲ್ಲಿ ಇತ್ತೀಚೆಗೆ ನಾನು ಮಡಿಕೇರಿಯಿಂದ ಮೈಸೂರಿಗೆ ಪ್ರಯಾಣಿಸಿದೆ. ಅಲ್ಲಿ ಚಾಲಕನ ಹಿಂಭಾಗದಲ್ಲಿ ಡಿವಿಜಿ ಅವರ ‘ಇರುವ ಭಾಗ್ಯವ ನೆನೆದು... ಬಿಡು’ ಎಂಬ ನೀತಿವಾಕ್ಯ, ‘ಪ್ರಯಾಣಿಕರು ಚಿಲ್ಲರೆ ಕೊಟ್ಟು ಸಹಕರಿಸಿ’ ಎಂಬ ಮನವಿಯ ಮುಂದುವರೆದ ಭಾಗದಂತೆ ಮುದ್ರಿತವಾಗಿತ್ತು.
ಇದನ್ನು ಕಂಡಾಗ, ನಿರ್ವಾಹಕನು ಪ್ರಯಾಣಿಕರಿಗೆ ಕೊಡಬೇಕಾದ ಚಿಲ್ಲರೆಯನ್ನು ಒಂದೊಮ್ಮೆ ಹಿಂದಿರುಗಿಸದಿದ್ದರೂ, ‘ಇರುವ ಭಾಗ್ಯವ ನೆನೆದು ಬಾರದ ಚಿಲ್ಲರೆಯ ಚಿಂತೆ ಬಿಡು, ಹರುಷಕ್ಕಿದೆ ದಾರಿ’ ಎಂದು ಹೇಳಿ ಸಾರಿಗೆ ನಿಗಮವು ಪ್ರಯಾಣಿಕರನ್ನು ಸಂತೈಸಿದಂತೆ ತೋರಿತು.