2015– 16ನೇ ಶೈಕ್ಷಣಿಕ ವರ್ಷದ ಆರಂಭದಲ್ಲೇ ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಮುಗಿಸಿ ಶಿಕ್ಷಕರ ಕೊರತೆ ನೀಗಿಸುವುದಾಗಿ ಶಿಕ್ಷಣ ಸಚಿವರು ಹೇಳಿಕೆ ನೀಡಿದ್ದರು. ಆದರೆ ಶೈಕ್ಷಣಿಕ ವರ್ಷ ಮುಗಿಯುವ ಸಮಯ ಬರುತ್ತಿದ್ದರೂ ಇನ್ನೂ ಶಿಕ್ಷಕರ ನೇಮಕಾತಿ ಪೂರ್ಣಗೊಂಡಿಲ್ಲ.
ಸರ್ಕಾರದ ಎಲ್ಲ ಯೋಜನೆಗಳು, ನಿರ್ಧಾರಗಳು ಮತ್ತು ನೇಮಕಾತಿಗಳು ಚುನಾವಣೆ ಹಿತದೃಷ್ಟಿಯ ಹಿನ್ನೆಲೆ ಹೊಂದಿರುತ್ತವೆ. ಬಹುಶಃ ಮುಂದಿನ ವರ್ಷ ವಿವಿಧ ನೇಮಕಾತಿಪ್ರಕ್ರಿಯೆ ಪೂರ್ಣಗೊಳ್ಳಬಹುದು. ಏಕೆಂದರೆ ಅದರ ಮರು ವರ್ಷ ಚುನಾವಣೆ ಇದೆ. ತಾವು ಅಧಿಕಾರದಲ್ಲಿ ಮುಂದುವರಿದರೆ ಸಾಕು ರಾಜ್ಯದ ಗತಿ ಏನಾದರಾಗಲಿ ಎಂಬಂತಿದೆ ಸರ್ಕಾರದಲ್ಲಿರುವವರ ಧೋರಣೆ.