ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಸರ್ಕಸ್‌ ನಡಿಗೆಗೆ ಮುಕ್ತಿ ಕಾಣಿಸಿರಿ

ಕುಂದು ಕೊರತೆ
Last Updated 26 ಅಕ್ಟೋಬರ್ 2015, 19:53 IST
ಅಕ್ಷರ ಗಾತ್ರ

ಕೆಂಚೇನಹಳ್ಳಿಯಿಂದ ಮೈಸೂರು ರಸ್ತೆಗೆ ಲಿಂಕ್‌ ನೀಡುವ ರಸ್ತೆಯು ಕೆಸರಿನಿಂದ, ಕೊಚ್ಚೆ ನೀರಿನಿಂದ, ಬುರುದೆಯಿಂದ ತುಂಬಿದೆ. ಪ್ರತಿದಿನ ಈ  ರಸ್ತೆಯಲ್ಲಿ ಸಾವಿರಾರು ಜನರು ವಿವಿಧ ಫ್ಯಾಕ್ಟರಿಗಳಿಗೆ ಹೋಗುತ್ತಾರೆ. ಆದರೆ ಯಾರಿಗೂ ನಿರಾಳವಾಗಿ ಸಾಗಲು ಆಗುತ್ತಿಲ್ಲ.

ಕಾರಣ ಇಡೀ ರಸ್ತೆಯೆಲ್ಲಾ ಕೆಸರು ಮಣ್ಣಿನಿಂದ ತುಂಬಿರುತ್ತದೆ. ಜೊತೆಗೆ ಮಳೆ ಬಂದಾಗ ಆ ನೀರು ಸೇರಿದರೆ ಮುಗಿಯಿತು. ಈ ರಸ್ತೆ ಬಿಟ್ಟು ಬೇರೆ ರಸ್ತೆಯಿಲ್ಲ. ಸಾರ್ವಜನಿಕರು ಈ ರಸ್ತೆಯನ್ನೇ ನಂಬಿಕೊಂಡಿದ್ದಾರೆ. ಜನರು ಪ್ರತಿದಿನ ಈ ರಸ್ತೆಯಲ್ಲಿ ಸರ್ಕಸ್‌ ಮಾಡಿಕೊಂಡು ತಿರುಗಾಡಬೇಕಾಗಿದೆ. ಸಂಬಂಧಿಸಿದ ಅಧಿಕಾರಿಗಳು ಈ ರಸ್ತೆಗೆ ಡಾಂಬರು ಹಾಕಿಸಿಕೊಡಬೇಕು ಅಥವಾ ಸಿಮೆಂಟ್‌ನಿಂದಲಾದರೂ ರಸ್ತೆಯನ್ನು ಸರಿ ಮಾಡಿಕೊಡಬೇಕಾಗಿ ಪ್ರಾರ್ಥಿಸುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT