ದೇಶಕ್ಕೆ ಸ್ವಾತಂತ್ರ್ಯ ಬಂದು ೬೭ ವರ್ಷ ಆಗಿದೆ. ಸಮಾನತೆಯನ್ನು ಸಾರುವ ಸಂವಿಧಾನವೂ ಸಿಕ್ಕಿದೆ. ಆದರೆ ಈಗಲೂ ದಲಿತರನ್ನು ದೇವಾಲಯಗಳ ಒಳಗೆ ಬಿಡಲ್ಲ ಎಂದರೆ ಈ ವ್ಯವಸ್ಥೆಯನ್ನು ಹೇಗೆ ಅರ್ಥಮಾಡಿಕೊಳ್ಳುವುದು?
ಒಬ್ಬ ಸಂಸದರೇ ದೇವಾಲಯ ಪ್ರವೇಶಿಸಲು ಹೆದರುತ್ತಾರೆ ಎಂದರೆ ಇನ್ನು ಸಾಮಾನ್ಯ ದಲಿತನ ಸ್ಥಿತಿ ಹೇಗಿರುತ್ತದೆ?
ಭ್ರಷ್ಟಾಚಾರದ ವಿರುದ್ದ ಮಾತನಾಡುವವರಿದ್ದಾರೆ, ಮಹಿಳೆಯರ ಹಕ್ಕುಗಳ ಪರ ಮಾತನಾಡುವವರಿದ್ದಾರೆ. ಆದರೆ ದಲಿತರ ದೇವಾಲಯ ಪ್ರವೇಶದ ಬಗ್ಗೆ ಮಾತನಾಡುವವರು ಬಹಳ ಕಡಿಮೆ. ಆದ್ದರಿಂದಲೇ ಈಗಲೂ ದಲಿತರು ದೇವಾಲಯ, ಮಠ, ಸವರ್ಣೀಯರ ಮನೆಗಳ ಆಚೆ ನಿಲ್ಲುವ ಸ್ಥಿತಿ ಇದೆ. ಸಂಸದ ರಮೇಶ ಜಿಗಜಿಣಗಿ ಪ್ರಕರಣದ ನೆಪದಲ್ಲಾದರೂ ಒಂದು ತುರ್ತು ಚಳವಳಿ ನಡೆಯಲಿ.