‘ನೊಂದವರು ಶಪಿಸಬೇಕಿಲ್ಲ...’ ಎಂಬ ಗಾದೆ ಇದೆ. ತಮ್ಮದೇನೂ ತಪ್ಪಿಲ್ಲದಿದ್ದರೂ ಮತ್ತೊಬ್ಬರಿಂದ ನೋವು ತಿಂದಾಗ ಆ ನೋವೇ ನೋವನ್ನು ನೀಡಿದವರಿಗೆ ಶಾಪವಾಗುತ್ತದೆ ಮತ್ತು ಅವರಿಗೆ ಕೆಟ್ಟದಾಗುತ್ತದೆ. ಈ ಮಾತು ಅಜ್ಜಿ, ಮುತ್ತಜ್ಜಿಯ ಕಾಲದಿಂದಲೂ ಬಂದಿರುವ ಮಾತು. ಅನೇಕ ಸಂದರ್ಭಗಳಲ್ಲಿ ಜನರಿಗೆ ಅನುಭವಕ್ಕೂ ಬಂದಿರಬಹುದು.
ಪಿ.ಯು.ಸಿ. ಮಕ್ಕಳ ಪೋಷಕರೆಲ್ಲರೂ ಸ್ಥಿತಿವಂತರಾಗಿರುವುದಿಲ್ಲ. ಮಕ್ಕಳು ಮುಂದೆ ಬರಲೆಂದು ಚೀಟಿ ಕಟ್ಟಿ, ಸಾಲ ಮಾಡಿ ಓದಿಸುವವರೇ ಹೆಚ್ಚು. ಈ ಮಕ್ಕಳ ಭವಿಷ್ಯದ ಜೊತೆ ಆಡುವುದು ಎಷ್ಟು ಸರಿ? ಇನ್ನು ಮೌಲ್ಯಮಾಪಕರು ತಮಗೆ ಬರಬೇಕಾಗಿರುವ ಹಳೆಯ ಬಾಕಿಯ ಬಗ್ಗೆ ನೂರಾರು ಕನಸು ಕಟ್ಟಿರುತ್ತಾರೆ.
ತಮ್ಮ ಸಮಸ್ಯೆಗಳನ್ನೆಲ್ಲಾ ಬದಿಗಿಟ್ಟು ಮಕ್ಕಳಿಗೆ ಪಾಠ ಹೇಳುವುದಿಲ್ಲವೇ? ಯಾರದೋ ಹಣದಿಂದ ಶ್ರೀಮಂತರಾಗಿ ಆರಾಮ ಜೀವನ ನಡೆಸುತ್ತಿರುವವರನ್ನು ಕಂಡು ‘God sees the truth but waits’ ಎಂದು ಸಮಾಧಾನ ಹೊಂದುವ ಬದಲು, ಮುಷ್ಕರ ಮಾಡುತ್ತಿರುವ ಉಪನ್ಯಾಸಕರ ನೋವು ಸಂಬಂಧಪಟ್ಟವರಿಗೆ ಶೀಘ್ರ ಶಾಪವಾಗಲಿ ಎನ್ನೋಣವೇ? ಹೀಗಾದರೂ ಮುಂದಿನ ಅಧಿಕಾರಿಗಳಿಗೆ ಪಾಠವಾಗಬಹುದು.