ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯಾ ವರ್ಷ ಪ್ರಕಟವಾದ ಪುಸ್ತಕಗಳನ್ನು ಆಯ್ಕೆ ಮಾಡಿ, ‘ಏಕಗವಾಕ್ಷಿ’ ಯೋಜನೆಯಡಿ ಖರೀದಿಸುತ್ತಿತ್ತು. ಇದರಿಂದ ಲೇಖಕ, ಪ್ರಕಾಶಕರಿಗೆ ಬಹಳ ಅನುಕೂಲ ಆಗಿತ್ತು. ಆದರೆ ಕಳೆದ ಒಂದು ವರ್ಷದಿಂದ ಖರೀದಿ ನಿಂತಿದೆ.
2011 ರಲ್ಲಿ ಪ್ರಕಟವಾದ ಪುಸ್ತಕಗಳ ಆಯ್ಕೆ ಪಟ್ಟಿಯನ್ನು ಇಲಾಖೆ ಸಿದ್ಧಪಡಿಸಿದೆ. ಆದರೆ, ಖರೀದಿ ಆದೇಶ ನೀಡಿಲ್ಲ! ಈ ಸಂಬಂಧ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ: ‘ಸರ್ಕಾರದಿಂದ ಅನುದಾನ ಬಂದಿಲ್ಲ; ಆದ್ದರಿಂದ ಖರೀದಿಸಿಲ್ಲ’ ಎಂಬ ಉತ್ತರ ಬಂತು.
ಆದ್ದರಿಂದ ಗ್ರಂಥಾಲಯ ಇಲಾಖೆಗೆ ಸಂಬಂಧಿಸಿದ ಸಚಿವರು ಈ ವಿಷಯವನ್ನು ಗಮನಿಸಿ, ಇಲಾಖೆಗೆ ಅನುದಾನ ಬಿಡುಗಡೆ ಮಾಡಿ, ಪುಸ್ತಕಗಳ ಖರೀದಿಗೆ ನೆರವಾಗಲಿ.